ರಾಜೇಂದ್ರ ಅಗ್ನಿಹೋತ್ರಿ (೧೯೩೮-೨೦೦೮) ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದರು. ಅವರು ಉತ್ತರ ಪ್ರದೇಶದ ಝಾನ್ಸಿಯನ್ನು ಪ್ರತಿನಿಧಿಸುವ ಒಂಬತ್ತನೇ, ಹತ್ತನೇ, ಹನ್ನೊಂದನೇ ಮತ್ತು ಹನ್ನೆರಡನೇ ಲೋಕಸಭೆಯ ಸದಸ್ಯರಾಗಿದ್ದರು. ೧೯೬೩ ರಿಂದ ೧೯೯೮ ರವರೆಗೆ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು. ಇವರು ೧೯೮೦ ರಿಂದ ೧೯೮೫ ರವರೆಗೆ ಝಾನ್ಸಿ ನಗರದಿಂದ ಉತ್ತರ ಪ್ರದೇಶ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯ ಸಚೇತಕರಾಗಿದ್ದರು. ಇವರು ೫ ಜೂನ್ ೨೦೦೮ ರಂದು ನಿಧನರಾದರು. == ಬಾಹ್ಯ ಕೊಂಡಿಗಳು == == ಉಲ್ಲೇಖಗಳು ==